ಮುಂಜಾನೆಯ ಹಗಲಲ್ಲಿ

ಮುಂಜಾನೆಯ ಹಗಲಲ್ಲಿ
ಮಿಂದ ಬೆಳ್ಳಿ ನಾನಾಗಿ
ಹಸನಾದ ಬಾಳಿಗೆ
ಹೊಸತಾದ ಪ್ರೀತಿ
ತುಂಬಿದ ಭಾಸ್ಕರ ನೀನಾಗಿ ||

ಋತು ಚಕ್ರಧಾರೆ ಹೊನಲಲ್ಲಿ
ಓಕುಳಿ ಚೆಲ್ಲಿದ
ವಸಂತ ನೀನಾಗಿ
ನಿನ್ನಲಿ ಬೆರೆತ ಮನವು
ತಂಪನೊಸೆದ ಪ್ರಕೃತಿ ನಾನಾಗಿ ||

ಹೊಂಬೆಳಕ ಸಂಜೆಯಲಿ
ಮೇಘದಲೆ ಚಿತ್ತಾರ ಬಿಡಿಸಿ
ಅನಂತ ನೀನಾಗಿ
ರೂಪ ಮಾಲಿಕೆಯ ಬಣ್ಣಹೊಯ್ದ
ಸ್ವರೂಪ ನಾನಾಗಿ ||

ಹುಣ್ಣಿಮೆಯ ರಾತ್ರಿಯಲಿ
ಚಂದ್ರಮನ ಬೆಳಕಲಿ ಬೀಸುವ
ತಂಗಾಳಿ ನೀನಾಗಿ
ಹಸಿರಾದ ಒಡಲಲಿ ಹಸನಾದ ಒಲುಮೆಯ
ಇಬ್ಬನಿ ನಾನಾಗಿ ||

ಮೂಡಣದಾ ಭಾಸ್ಕರ
ನಿನ್ನಲಿ ನಾನಿ ಕಿರಣವಾಗಿ
ಬೆಳ್ಳಿ ನಾನಾಗಿ ಭಾಸ್ಕರ ನೀನಾಗಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಕಿ
Next post ಸುಗ್ಗಿಯ ಸಂಭ್ರಮ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys